ದೇಹದ ಬಂಡಿಗೆ ವಚನಗಳೇ ಕೀಲವಾಗಬೇಕಿದೆ : ಫಕೀರೇಶ್ವರ ಶ್ರೀಗಳು

Ravi Talawar
WhatsApp Group Join Now
Telegram Group Join Now

ಗದಗ,ಏಪ್ರಿಲ್ 10:  : ತಾಲೂಕಿನ ಕಳಸಾಪುರ ಸುಕ್ಷೇತ್ರದ ಶ್ರೀ ಈಶ್ವರ ಬಸವಣ್ಣ  ದೇವರ ೧೪ ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ಬೃಹತ್ ಕುಂಭಮೇಳ ಜರುಗಿತು.

ಈ ಕುಂಭಮೇಳವು ಈಶ್ವರ ದೇವಸ್ಥಾನದಿಂದ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತೆರಳಿ
ಈಶ್ವರ ಲಿಂಗಕ್ಕೆ ಜಲಾಭಿಷೇಕಗೊಂಡಿತು. ನಂತರ ಧರ್ಮಸಭೆ ಜರುಗಿತು.

ಈ ಸಂದರ್ಭದಲ್ಲಿ ಓಂಕಾರಗಿರಿ ಓಂಕಾರೇಶ್ವರ ಶ್ರೀಮಠದ ಪೂಜ್ಯಶ್ರೀ ಫಕೀರೇಶ್ವರ ಶಿವಾರ್ಚಾಯರು ಸಾನಿಧ್ಯವಹಿಸಿ ಮಾತನಾಡಿ, ದೇಹ ಎನ್ನುವುದು ಕಾಮ, ಕ್ರೋಧ, ಲೋಭ, ಮೋಹ, ಮತ್ಸರ, ಮಧ ಎಂಬ ಬುನಾಧಿಗಳನ್ನು ತುಂಬಿದ ಬಂಡಿಯಾಗಿದೆ.ರೈತರ ಬಂಡಿಗೆ ಕಬ್ಬಿಣದ ಕೀಲು ಆಸರೆಯಾದರೆ, ದೇಹದ ಈ ಬಂಡಿಗೆ ವಚನಗಳೇ ಕೀಲವಾಗಬೇಕಿದೆ ಎಂದು ಹೇಳಿದರು.

ಕಳಸಾಪೂರ ಗ್ರಾಮವು ಶೈಕ್ಷಣಿಕವಾಗಿ, ಧಾರ್ಮಿಕವಾಗಿ  ಉತ್ತಮಕಾರ್ಯಗಳನ್ನು ಮಾಡುತ್ತ ಬಂದಿದೆ. ಪ್ರವಚನಕಾರರಾದ ಶರಣಶ್ರೀ ಶಿವಲಿಂಗಯ್ಯಶಾಸ್ತ್ರಿಗಳು ಹಿರೇಮಠ ಸಿದ್ದಾಪೂರ ಅವರು ಮಾತನಾಡಿ, ಸಪ್ತಸೂತ್ರಗಳು ಮನುಷ್ಯನ ಜೀವನದಲ್ಲಿ ಅಳವಡಿಸಿಕೊಂಡಾಗ ಕೋರ್ಟು- ಕಚೇರಿಗಳ ಮೆಟ್ಟಿಲು ಹತ್ತುವ ಅವಶ್ಯಕತೆ ಇರುವದಿಲ್ಲ.ಅದ್ದರಿಂದ ಬಸವಣ್ಣನವರು ಏಳು ಸೂತ್ರಗಳಲ್ಲಿ ತಮ್ಮ ವಚನಗಳಲ್ಲಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು
ಬೇಡ, ಅನ್ಯರಿಗೆ ಅಸಯ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ ಎಂದು ಹೇಳಿದ್ದಾರೆ.

ಎಂದರು. ಮಹಾತ್ಮಾಗಾಂಧಿಜೀ ಇದೇ ದೇಶದ ಜನತೆಗೆ ಕೂಡ ಮಾನವ ಬದುಕಿಗೆ ಏಳು ಸೂತ್ರಗಳು ಬಹುಮುಖ್ಯ ಎಂದು ಹೇಳಿದ್ದಾರೆ ಪ್ರತಿಯೊಬ್ಬರು ಕೂಡ ಜೀವನದಲ್ಲಿ ಏಳು ಸೂತ್ರಗಳನ್ನು ಅಳವಡಿಸಿಕೊಂಡು ಸಾಮಾನ್ಯರು ಶರಣರಾಗಬಹುದು ಎಂದು ಹೇಳಿದರು.

ವೇದಿಕೆ ಮೇಲೆ ಬಸಯ್ಯಸ್ವಾಮಿ ಇಟಗಿಮಠ, ಸಿ.ಬಿ.ಪಲ್ಲೇದ, ವೀರಯ್ಯ ಕಂಬಾಳಿಮಠ, ನಿಂಗನಗೌಡ ತಿಪ್ಪನಗೌಡ್ರ, ಸಾಧಿಕ ಶೇಖ, ಮಹಾಂತಯ್ಯ ಇಟಗಿಮಠ,
ಬಸನಗೌಡ ರಾಮನಗೌಡ, ರಾಮಣ್ಣ ಅಣ್ಣಿಗೇರಿ, ಮಂಜುನಾಥ ಇಟಗಿಮಠ, ಬಸಯ್ಯ ಸಾಸ್ವಿಹಳ್ಳಿಮಠ, ಈರಣ್ಣ ಬಜಂತ್ರಿ, ಶ್ರೀಕಾಂತ ಹೂಗಾರ, ದ್ಯಾಮಣ್ಣ ಬಡಿಗೇರ, ಬಸವರಾಜ ಹಗೇದಾಳ, ಸಂತೋಷ ನಾಯ್ಕರ, ನಿಂಗಯ್ಯ ಇಟಗಿಮಠ, ಮಂಜುನಾಥ ಘೋಡಕೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article