ಸಾಲ ಮನ್ನಾ ಮಾಡಿ, ಬರ ಪರಿಹಾರ ಘೋಷಿಸಿ: ರಾಜ್ಯ ರೈತಸಂಘ ಪ್ರತಿಭಟಿಸಿ ಸರ್ಕಾರಕ್ಕೆ ಮನವಿ

Ravi Talawar
WhatsApp Group Join Now
Telegram Group Join Now

ಬೆಳಗಾವಿ,ಏ.02: ಬರ ಸ್ಥಿತಿ ಹೆಚ್ಚಾಗಿದೆ, ರೈತರು ಸಂಕಷ್ಟದಲ್ಲಿದ್ದಾರೆ ಈ ಹೊತ್ತಲ್ಲಿ ಚುನಾವಣೆ ಕಡೆಗೆ ಒಲುವ ತೋರುವುದನ್ನಷ್ಟೇ ಮಾಡದೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿ. ರೈತರ ಸಾಲ ಮನ್ನಾ, ಬರ ಪರಿಹಾರವನ್ನು ಘೋಷಿಸಿ ಎಂದು ರಾಜ್ಯ ರೈತಸಂಘ ಮೆರವಣಿಗೆ ಹೊರಟು ಪ್ರತಿಭಟಿಸಿತು.

ಸೂಕ್ತ ಸಮಯಕ್ಕೆ ಮಳೆ ಆಗದೇ ಇರುವುದರಿಂದ ಇದೀಗ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಭೂಮಿಯಲ್ಲಿ ಫಸಲು ಇಲ್ಲ, ಜನ ಜಾನುವಾರುಗಳಿಗೆ ಕುಡಿಯುವುದಕ್ಕೆ ನೀರಿನ ಕೊರತೆಯೂ ಆಗಿದೆ. ಹೀಗಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರೈತರ ಬರ ಸಂಕಷ್ಟವನ್ನು ಬಗೆಹರಿಸಲು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟಿಸಿತು.

ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹೊರಟು ಪ್ರತಿಭಟಿಸಿತು. ಜೊತೆಗೆ ತೀರ ಬರದಿಂದಾಗಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ರೈತರ ಸಾಲವನ್ನು ಮನ್ನಾಗೊಳಿಸಿ, ಭ್ರಷ್ಟರಿಗಾಗಿ ಆಡಳಿತ ಮಾಡಬೇಡಿ, ಫಸಲು ಕಳೆದುಕೊಂಡಿರುವ ರೈತರಿಗೆ ಪರಿಹಾರ ಘೋಷಿಸಿ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಪ್ರತಿಭಟನೆ ವೇಳೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article