ಎನ್ ಡಿ ಎ ಮಿತ್ರಪಕ್ಷಗಳ ಕಾರ್ಯಕರ್ತರ ಬಹಿರಂಗ ಸಭೆ: ಬುಧವಾರ ಸಾಯಂಕಾಲ 4 ಗಂಟೆಗೆ

Ravi Talawar
WhatsApp Group Join Now
Telegram Group Join Now

ಬೈಲಹೊಂಗಲಏ.01: ಬೆಳಗಾವಿ ಲೋಕಸಭಾ ಚುನಾವಣಾ ಪ್ರಚಾರಾರ್ಥಕವಾಗಿ ಬುಧವಾರ  3/4/ 2024 ರ ಸಾಯಂಕಾಲ 4:00 ಗಂಟೆಗೆ ಬೈಲಹೊಂಗಲ ನಗರದ ಮುರಗೋಡ ರಸ್ತೆಯಲ್ಲಿರುವ ಪೃಥ್ವಿ ಗಾರ್ಡನ್ ದಲ್ಲಿ ಎನ್ ಡಿ ಎ ಮಿತ್ರಪಕ್ಷಗಳ ಕಾರ್ಯಕರ್ತರ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಲೋಕಸಭಾ ಅಭ್ಯರ್ಥಿಯಾದ ಶ್ರೀ ಜಗದೀಶ್ ಶೆಟ್ಟರ್, ಮಾಜಿ ಶಾಸಕರಾದ ಜಗದೀಶ್ ಮೆಟಗುಡ್ಡ, ವಿಶ್ವನಾಥ್ ಪಾಟೀಲ್, ಜೆಡಿಎಸ ಜಿಲ್ಲಾಧ್ಯಕ್ಷರಾದ ಶಂಕರ್ ಮಾಡಲಗಿ, ಹಾಗೂ ಜಿಲ್ಲೆಯ ಎನ್,ಡಿ,ಎ ಮೈತ್ರಿಕೂಡದ ನಾಯಕರುಗಳು ಆಗಮಿಸಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪದಾಧಿಕಾರಿಗಳು ಕಾರ್ಯಕರ್ತರು ಆಗಮಿಸಬೇಕೆಂದು  ಬಿಜೆಪಿ ಮಂಡಲ ಅಧ್ಯಕ್ಷರಾದ ಗುರುಪಾದ ಕಳ್ಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

WhatsApp Group Join Now
Telegram Group Join Now
Share This Article