ಶಾಖದ ಅಲೆಗೆ ಕರ್ನಾಟಕ ತತ್ತರ : 2 ಸಾವು, 521 ಹೀಟ್‌ ಸ್ಟ್ರೋಕ್‌ ಪಕರಣ ದಾಖಲು!

Hasiru Kranti
WhatsApp Group Join Now
Telegram Group Join Now

ಬೆಂಗಳೂರು ಏ., ೦೬- ಕರ್ನಾಟಕದ ಅನೇಕ ಭಾಗಗಳಲ್ಲಿ ಏರುತ್ತಿರವ ಬಿಸಿಲಿನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮಾರ್ಚ ೧ ರಿಂದ ಏಪ್ರೀಲ ೩ರವರೆಗೆ ರಾಜ್ಯದಲ್ಲಿ ಬಿಸಿಲಿನ ಝಳಕ್ಕೆ ೨ ಸಾವುಗಳು ಸಂಭವಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಮತ್ತು ಈ ಬಿಸಿಲಿನ ತಾಪದಿಂದ ೫೨೧ ಜನರಿಗೆ ಹೀಟ್ ಸ್ಟ್ರೋಕ್ ಆಗಿರುವ ಬಗ್ಗೆ ವರದಿಯಾಗಿದೆ.
ಬಿಸಿಲಿನ ತಾಪಕ್ಕೆ ಈವರೆಗೆ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಸಾವು ಸಂಭವಿಸಿರುವ ಬಗ್ಗೆ ವರದಿ ತಿಳಿಸಿದೆ.
ಆರೋಗ್ಯ ಇಲಾಖೆ ಅಂಕಿಅಶಂಗಳ ಪ್ರಕಾರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬಿಸಿಗಾಳಿ ತಡೆಯಲಾಗದೆ ಹೀಟ್ ಸ್ಟ್ರೋಕ್ (ಶಾಖಾಘಾತ) ಪ್ರಕರಣಗಳು ಕಂಡುಬಂದಿವೆ. ಅವು ಮೇಲಿನ ಜಿಲ್ಲೆಗಳ ಪ್ರಕಾರ ಕ್ರಮವಾಗಿ ೧೦೨, ೬೯, ೫೬ ಮತ್ತು ೫೪ ಹೀಟ್ ಸ್ಟ್ರೋಕ್ (ಶಾಖಾಘಾತ) ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ತನ್ನ ದೈನಂದಿನ ಹವಾಮಾನ ವರದಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ತಾಪಮಾನ ೪೨.೭ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಮತ್ತು ರಾಜ್ಯದ ಭೌಗೋಳಿಕ ಪ್ರದೇಶದ ಶೇಕಡಾ ೭೫ ರಷ್ಟು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು ೩೬ ರಿಂದ ೪೨ ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದ್ದು ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ೪೩ ರಿಂದ ೪೫ ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. ಕೊಪ್ಪಳದಲ್ಲಿ ೪೧.೮, ಬಾಗಲ ಕೋಟೆ ೪೧.೧, ಬೀದರ್ ೩೯.೨, ಕಲಬುರಗಿಯಲ್ಲಿ ೪೨.೮, ಗದಗ ೪೦.೬, ವಿಜಯಪುರ ೪೦, ಧಾರವಾಡ ೩೯.೮, ದಾವಣಗೆರೆ ೪೦.೫, ಹಾಸನ ೩೭.೪, ಮಂಡ್ಯ ೩೮.೨, ಮೈಸೂರು ೩೭, ಬೆಂಗಳೂರು ೩೭ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ತಿಳಿಸಿದೆ.
ರಾಜ್ಯದ ೧೨ ಕಡೆಗಳಲ್ಲಿ ಗುರುವಾರ ಗರಿಷ್ಠ ತಾಪಮಾನ ದಾಖಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಹೆಚ್ಚೂ ಕಡಿಮೆ ಜೂನ್ ವರೆಗೂ ಇದೇ ತಾಪಮಾನ ಮುಂದುವರೆಯುವ ನಿರೀಕ್ಷೆಯಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಆಸ್ಪತ್ರೆ ಆಡಳಿತಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಹೀಟ್‌ಸ್ಟ್ರೋಕ್ ಪ್ರಕರಣಗಳನ್ನುಸರಿಯಾದ ಸಮಯದಲ್ಲಿ ವರದಿ ಮಾಡಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನಿಡಿದ್ದಾರೆ. ಬಿಸಿಲಿನಿಂದ ಉಂಟಾದ ಸೆಳೆತ ಮತ್ತು ಬಳಲಿಕೆಯಂತಹ ಪ್ರಾಥಮಿಕ ದೂರುಗಳಿಗೂ ಚಿಕಿತ್ಸೆ ನೀಡಲು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೀಟ್‌ಸ್ಟ್ರೋಕ್-ನಿರ್ವಹಣಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಬೆಂಗಳೂರಿನಲ್ಲಿ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ, ಇಂದಿರಾನಗರದ ಸರ್ ಸಿವಿ ರಾಮನ್ ಜನರಲ್ ಆಸ್ಪತ್ರೆ ಮತ್ತು ಜಯನಗರ ಜನರಲ್ ಆಸ್ಪತ್ರೆಯಲ್ಲಿ ಇಂತಹ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಐದು ಹಾಸಿಗೆಗಳು ಮತ್ತು ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಎರಡು ಹಾಸಿಗೆಗಳನ್ನು ಹೀಟ್‌ಸ್ಟ್ರೋಕ್ ಪ್ರಕರಣಗಳಿಗೆ ಮೀಸಲಿಡಲಾಗಿದೆ, ಜೊತೆಗೆ ಆಂಬ್ಯುಲೆನ್ಸ್‌ಗಳನ್ನು ಸಜ್ಜಾಗಿರಿಸಲಾಗಿದೆ ಎಂದು ಕೂಡ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಾಸ್ತಿ ತಂಪಾದ ನೀರು ಕುಡಿಯಬೇಡಿ ಜಾಸ್ತಿ ಬಿಸಿಲು ಇದೆ ಎಂದು ಜಾಸ್ತಿ ತಂಪಾದ ನೀರು ಕುಡಿಯಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಜಾಸ್ತಿ ತಣ್ಣಗಿರುವ ನೀರು ಕುಡಿಯುವುದರಿಂದ ರಕ್ತನಾಳಗಳ ಸಂಕೋಚನ ಉಂಟಾಗಬಹುದು. ದೇಹವು ಹೈಡ್ರೇಟ್ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಜಾಸ್ತಿ ತಂಪಾದ ನೀರು ಕುಡಿಯುವುದನ್ನು ತಪ್ಪಿಸುವಂತೆ ಸೂಚನೆ ನೀಡಿದ್ದಾರೆ. ವೇಗವಾಗಿ ನಿರ್ಜಲೀಕರಣಗೊಳಿಸುವ ಕೆಫೀನ್, ಕಾರ್ಬೊನೇಟೆಡ್ ಮತ್ತು ಆಲ್ಕೊಹಾಲು ಪಾನೀಯಗಳನ್ನು ಸೇವಿಸದಿರುವುದು ಉತ್ತಮ ಎಂದಿದ್ದಾರೆ. ಜನರು ಗರಿಷ್ಠ ತಾಪಮಾನದಲ್ಲಿ, ವಿಶೇಷವಾಗಿ ಮಧ್ಯಾಹ್ನ ಮತ್ತು ೩ ಗಂಟೆಯ ನಡುವೆ ಮನೆಯೊಳಗೆ ಇರಬೇಕು. ಜನರು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕೆಂದು ಸಲಹೆ ನೀಡಿದ್ದಾರೆ.
ಸನ್ಗ್ಲಾಸ್, ಛತ್ರಿ ಮತ್ತು ಟೋಪಿಗಳ ಬಳಕೆಯನ್ನು ಶಿಫಾರಸು ಮಾಡಿದ ಅವರು,
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವುದ ಕೂಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದು ದೇಹದ ಮೇಲ್ಮೈ ತಾಪಮಾನವನ್ನು ಕಡಿಮೆ ಮಾಡುತ್ತದೆ. ಮೇಲ್ಮೈ ಗ್ರಾಹಕಗಳು ನಂತರ ಮೆದುಳಿಗೆ ಅದು ತಂಪಾಗಿರುವ ಸಂಕೇತಗಳನ್ನು ಕಳುಹಿಸುತ್ತದೆ, ಅದು ಆಂತರಿಕವಾಗಿ ಅದು ಅಲ್ಲ. ಮೆದುಳಿಗೆ ತಪ್ಪು ಸಂಕೇತವನ್ನು ಪಡೆಯುವುದರಿಂದ ದೇಹದ ಆಂತರಿಕ ಕಾರ್ಯವಿಧಾನವು ಶಾಖವನ್ನು ಹರಡುವುದನ್ನು ತಡೆಯುತ್ತದೆ ಎಂದು ವಿವರಿಸಿದರು.

WhatsApp Group Join Now
Telegram Group Join Now
Share This Article