“ಬ್ಯಾಲೆಟ್ ಪೇಪರ್ ಯಾಕೆ, ಇವಿಎಂ ಓಕೆ” ಬ್ಯಾಲಟ್ ವೋಟಿಂಗ್ ವಿಧಾನದ ಲೋಪ ತೋರಿಸಿದ ಸುಪ್ರೀಂಕೋರ್ಟ್

Ravi Talawar
WhatsApp Group Join Now
Telegram Group Join Now

ನವದೆಹಲಿ, ಏಪ್ರಿಲ್ 16: ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬಂದ ಬಳಿಕ ಮತ ಎಣಿಕೆ ಪ್ರಕ್ರಿಯೆ  ಸುಗಮಗೊಂಡಿದೆ. ಆದರೆ, ತಂತ್ರಜ್ಞಾನವನ್ನು ಸರ್ಕಾರ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಳೆದ 10 ವರ್ಷಗಳಿಂದಲೂ ವಿಪಕ್ಷಗಳು ಆರೋಪಿಸುತ್ತಿವೆ. ಇವಿಎಂ ಬದಲು ಹಳೆಯ ಬ್ಯಾಲಟ್ ಬಾಕ್ಸ್ ಮತದಾನ ಪದ್ಧತಿಯನ್ನೇ ವಾಪಸ್ ತರಬೇಕೆಂಬ ಒತ್ತಾಯಗಳು ಇವೆ. ಇದೇ ವೇಳೆ, ಇವಿಎಂ ಮೆಷೀನ್​ನಲ್ಲಿ  ಮಾಡಲಾದ ಮತಗಳನ್ನು ವಿವಿಪ್ಯಾಟ್ ಸ್ಲಿಪ್​ಗಳ ಮೂಲಕ ಪರಿಶೀಲನೆ ನಡೆಸುವಂತಹ ವ್ಯವಸ್ಥೆ ಆಗಬೇಕು ಎಂದು ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿಗಳು ಸಲ್ಲಿಕೆ ಆಗಿವೆ. ಇದರ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ ಹಿಂದಿನ ಬ್ಯಾಲಟ್ ವೋಟಿಂಗ್ ವಿಧಾನದ ಲೋಪವನ್ನು ಎತ್ತಿತೋರಿಸಿದೆ.

ಇವಿಎಂ ಗಳಲ್ಲಿ ಮತ ಚಲಾಯಿಸಿದ್ದನ್ನು ವಿವಿಪ್ಯಾಟ್ ವ್ಯವಸ್ಥೆಯಿಂದ ಉತ್ಪಾದನೆಗೊಂಡ ಕಾಗದದೊಂದಿಗೆ ಪರಿಶೀಲಿಸಬೇಕೆಂಬ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗೌಪ್ಯ ಬ್ಯಾಲೆಟ್ ಮತನಾದ ವಿಧಾನದಿಂದಾಗುವ ಋಣಾತ್ಮಕ ಪರಿಣಾಮಗಳ ಬಗ್ಗೆ ತನಗೆ ತಿಳಿದಿದೆ ಎಂದು ಹೇಳಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ನಾವು 60 ನೇ ವಯಸ್ಸಿನಲ್ಲಿದ್ದೇವೆ. ಬ್ಯಾಲೆಟ್ ಪೇಪರ್ ಗಳಿರುವಾಗ ಏನೆಲ್ಲಾ ಆಯಿತು ಎಂಬುದು ನಮಗೆ ತಿಳಿದಿದೆ. ನೀವು ಅದನ್ನು ಮರೆತಿರಬಹುದು ಆದರೆ ನಾವು ಅದನ್ನು ಮರೆತಿಲ್ಲ ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದ್ದಾರೆ.

‘ನಾವೆಲ್ಲಾ ಈಗ 60 ವರ್ಷ ವಯಸ್ಸು ದಾಟಿದವರಿದ್ದೇವೆ. ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ಎಂದು ನಮಗೆಲ್ಲಾ ಗೊತ್ತಿದೆ. ನಿಮಗೆ ಅದು ಮರೆತುಹೋಗಿರಬಹುದು, ಆದರೆ, ನಾವು ಮರೆತಿಲ್ಲ,’ ಎಂದು ನ್ಯಾಯಪೀಠದಲ್ಲಿದ್ದ ನ್ಯಾ| ಸಂಜೀವ್ ಖನ್ನ ಹೇಳಿದ್ದಾರೆ. ಹೆಚ್ಚಿನ ಯೂರೋಪಿಯನ್ ದೇಶಗಳು ಇವಿಎಂ ಬದಲು ಬ್ಯಾಲಟ್ ಪೇಪರ್ ಮತದಾನ ವಿಧಾನವನ್ನು ಮರಳಿ ಆಯ್ಕೆ ಮಾಡಿಕೊಂಡಿರುವ ಸಂಗತಿಯನ್ನು ಉಲ್ಲೇಖಿಸಿ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಮುಂದಿಟ್ಟಿದ್ದ ವಾದಕ್ಕೆ ನ್ಯಾಯಮೂರ್ತಿಗಳು ಈ ಉತ್ತರ ನೀಡಿದರು.

ಇವಿಎಂ ವಿಧಾನದ ವಿರುದ್ಧ ಸಲ್ಲಿಸಲಾದ ಹಲವು ಅರ್ಜಿಗಳಲ್ಲಿ ಎಡಿಆರ್ (ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಒಂದು. ಎಡಿಆರ್ ಪರ ಪ್ರಶಾಂತ್ ಭೂಷಣ್ ವಕಾಲತು ವಹಿಸಿ, ಮತಪತ್ರದ ಮೂಲಕ ಮತದಾನ ಮಾಡುವ ಪದ್ಧತಿ ಮರಳಬೇಕು ಎಂದು ವಾದಿಸುತ್ತಿದ್ದರು.

‘ನಾವು ಪೇಪರ್ ಬ್ಯಾಲಟ್​ಗೆ ಮರಳಬಹುದು. ವಿವಿಪ್ಯಾಟ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಆಯ್ಕೆ. ಮೆಷಿನ್​ನಿಂದ ಹೊರಬರುವ ಪೇಪರ್ ಸ್ಲಿಪ್ ಅನ್ನು ಮತದಾರರು ಬ್ಯಾಲಟ್ ಬಾಕ್ಸ್​ಗೆ ಹಾಕಬಹುದು,’ ಎಂದು ಪ್ರಶಾಂತ್ ಭೂಷಣ್ ಅವರು ಜರ್ಮನಿಯ ಉದಾಹರಣೆ ನೀಡಿದರು.

ಮತ್ತೊಬ್ಬ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು, ಇವಿಎಂಗಳಲ್ಲಿ ಹಾಕಲಾದ ಮತಗಳನ್ನು ವಿವಿಪ್ಯಾಟ್​ಗಳೊಂದಿಗೆ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು. ಈ ವಾದವನ್ನು ನ್ಯಾಯಮೂರ್ತಿಗಳು ಪರಸ್ಕರಿಸಲಿಲ್ಲ.

60 ಕೋಟಿ ವಿವಿಪ್ಯಾಟ್ ಸ್ಲಿಪ್​ಗಳನ್ನು ಎಣಿಸಬೇಕಾಗುತ್ತದೆ, ಅಲ್ಲವೇ? ಮನುಷ್ಯನೇ ಎಣಿಕೆ ಮಾಡುತ್ತಾನಾದ್ದರಿಂದ ಪಕ್ಷಪಾತಿತನ, ಮಾನವ ಸಹಜ ದೌರ್ಬಲ್ಯ ಬರಬಹುದು. ಮನುಷ್ಯನ ಹಸ್ತಕ್ಷೇಪ ಇಲ್ಲದೆ ಯಂತ್ರಗಳು ನಿಖರ ಫಲಿತಾಂಶ ಕೊಡುತ್ತವೆ. ಮೆಷೀನ್ ಅಥವಾ ಸಾಫ್ಟ್​​ವೇರ್​ನಲ್ಲಿ ಮನುಷ್ಯನ ಹಸ್ತಕ್ಷೇಪ ಆದಾಗ ಮಾತ್ರ ಸಮಸ್ಯೆ ಉದ್ಭವ ಆಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಬಳಿ ಸಲಹೆ ಇದ್ದರೆ ಕೊಡಿ,’ ಎಂದು ನ್ಯಾ| ಸಂಜೀವ್ ಖನ್ನಾ ಹೇಳಿದರು.

WhatsApp Group Join Now
Telegram Group Join Now
Share This Article