ಕೆ ಪಿ ನಂಜುಂಡಿ ಅವರ ೫೮ನೆಯ ಹುಟ್ಟು ಹಬ್ಬ ಆಚರಣೆ

Ravi Talawar
WhatsApp Group Join Now
Telegram Group Join Now

ಗದಗ,16: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರು ಹಾಗೂ ವಿಧಾನಪರಿ?ತ್ ಸದಸ್ಯರಾದ ಸನ್ಮಾನ್ಯ ಶ್ರೀ ಕೆ ಪಿ ನಂಜುಂಡಿ ಅವರ ೫೮ನೆಯ ಹುಟ್ಟು ಹಬ್ಬದ ಅಂಗವಾಗಿ ವೀರೇಶ್ವರ ಪುಣ್ಯಾಶ್ರಮ ಮಠದಲ್ಲಿ ವಿಶ್ವಕರ್ಮರ ಕಣ್ಮಣಿ ಕೆ. ಪಿ ನಂಜುಂಡಿ ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಕೆ. ಪಿ. ನಂಜುಂಡಿಯವರ ಹೆಸರಿನಲ್ಲಿ ಕೇಕ್ ಕತ್ತರಿಸುವ ಮುಖಾಂತರ ಅವರಿಗೆ ೫೮ನೇ ಹುಟ್ಟುಹಬ್ಬ ಆಚರಿಸಿ ಅಲ್ಲಿರುವ ಅಂಧ, ಅನಾಥ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು.

ಅಖಿಲ ಕರ್ನಾಟಕ ವಿಶ್ವಕರ್ಮ ಸಭಾ ಗದಗ್ ಜಿಲ್ಲಾ ಘಟಕದ ಅಧ್ಯಕ್ಷರಾದ ದೇವೇಂದ್ರಪ್ಪ ಬಡಿಗೇರ್ ಮಾತನಾಡಿ ಕೆ. ಪಿ. ನಂಜುಂಡಿಯವರ ೫೮ನೇ ಹುಟ್ಟುಹಬ್ಬವನ್ನು ವಿರೇಶ್ವರ ಪುಣ್ಯಾಶ್ರಮದಲ್ಲಿ ಆಚರಿಸುತ್ತಿರುವುದು ಮತ್ತು ಅವರಿಗೆ ಆಯುರಾರೋಗ್ಯ, ಸುಖ, ಶಾಂತಿ, ನೆಮ್ಮದಿ, ಮತ್ತು
ರಾಜಕೀಯವಾಗಿ ಇನ್ನು ಎತ್ತರಕ್ಕೆ ಬೆಳೆಯಲಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಆಶೀರ್ವಾದ ಅವರ ಮೇಲೆರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಠದಲ್ಲಿ ಅಂಧ, ಅನಾಥ ಮಕ್ಕಳಿಗೆ ನಡೆಯುವಂತ ದಾಸೋಹಕ್ಕೆ ಅಕ್ಕಿ ಪಾಕೆಟ್‌ಗಳನ್ನು ಮಠಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಇತರೆ ಕಾರ್ಮಿಕರ ಸಂಘದ ಅಧ್ಯಕ್ಷರಾದ ವೀರಭದ್ರಪ್ಪ ಹಲವಾಗಲಿ, ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಆನಂದ ಕಮ್ಮಾರ, ವೀರಭದ್ರಪ್ಪ ಬಡಿಗೇರ, ಮೌನೇಶ ಬಡಿಗೇರ, ಮಹೇಶ ಬಡಿಗೇರ, ಶಂಕರಾಚಾರ್ಯ ಪತ್ತಾರ, ರಾಘು ಬಡಿಗೇರ, ರಮೇಶ ಬಡಿಗೇರ, ಕುಮಾರ ಬಡಿಗೇರ, ಮಹೇಶ ಬಡಿಗೇರ, ಪ್ರಕಾಶ ಬಡಿಗೇರ, ಈಶ್ವರ ಬಡಿಗೇರ, ವಿರೇಶ ಬಡಿಗೇರ, ಮಂಜು ಬಡಿಗೇರ ಸೇರಿದಂತೆ ವಿಶ್ವಕರ್ಮ ಸಮಾಜದ ಬಾಂಧವರು ಹಾಗೂ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು, ಕೆ. ಪಿ. ನಂಜುಂಡಿಯವರ ಅಭಿಮಾನಿಗಳು
ಶುಭ ಕೋರಿದರು.

 

WhatsApp Group Join Now
Telegram Group Join Now
Share This Article