ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಯುವಕರ ಗುಂಪು ಹಲ್ಲೆ : ಕೆಲ ಸಮಯ ಬಸ್ ಸಂಚಾರ ವ್ಯತ್ಯಯ

Hasiru Kranti
WhatsApp Group Join Now
Telegram Group Join Now

ಬೈಲಹೊಂಗಲ : ಬಸ್ ನಿಲ್ಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಬೈಲಹೊಂಗಲ ಪಟ್ಟಣದಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರು ಘಟನೆ ವರದಿಯಾಗಿದೆ.
ಧಾರವಾಡದಿಂದ ಬೈಲಹೊಂಗಲಕ್ಕೆ ಬಂದಿದ್ದ ಬಸ್ ಇದಾಗಿದ್ದು, ಚಾಲಕ ಮತ್ತು ಕಂಡಕ್‌ಟರ್ ಬಸ್ ನಿಲ್ಲಿಸಲಿಲ್ಲ ಎಂದು ಯುವಕರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜರುಗಿದೆ.
ಇದರಿಂದ ಆಕ್ರೋಶಗೊಂಡ ಬಸ್ ಸಾರಿಗೆ ನೌಕರರು, ಘಟನೆಯನ್ನು ಖಂಡಿಸಿ ಸಂಚಾರ ಸ್ಥಗಿತಗೊಳಿಸಿ ಬೈಲಹೊಂಗಲ ಪೋಲಿಸ್ ಠಾಣೆ ಎದುರು ಧರಣಿ ನಡೆಸಿ, ವೃತ್ತಿ ಸುರಕ್ಷತೆ ನೀಡಲು ಆಗ್ರಹಿಸಿದ್ದಾರೆ. ಮತ್ತು ಹಲ್ಲೆ ಮಾಡಿದವರನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಘಟನೆಯನ್ನು ಖಂಡಿಸಿ ಬೇರೆ ಬೇರೆ ತಾಲೂಕಿನ ಸಾರಿಗೆ ಸಿಬ್ಬಂದಿ ಬೈಲಹೊಂಗಲ ಪೊಲೀಸ್ ಠಾಣೆ ಎದುರ ಜಮಾವಣೆಯಾಗಿ ಪ್ರತಿಭಟಿಸಿದರು. ಇದರಿಂದ ಕೆಲ ಸಮಯ ಬಸ್ ಸಂಚಾರ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

WhatsApp Group Join Now
Telegram Group Join Now
Share This Article