ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸಗೆ ಬೆಂಬಲಿಸಿ: ಬಾಬಾಸಾಹೇಬ ಪಾಟೀಲ 

Ravi Talawar
WhatsApp Group Join Now
Telegram Group Join Now
ನೇಸರಗಿ,ಏಪ್ರಿಲ್ 12: ಕಿತ್ತೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಾಗೂ ಜನರ ಕೈಗೆ ಸಿಗುವ ಸಂಸದರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಡಾ. ಅಂಜಲಿ ನಿಂಬಾಲ್ಕರ್ ಅವರನ್ನು ಲೋಕಸಭಾ  ಸಂಸದರಾಗಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ನೀವೆಲ್ಲರೂ ಕೈಜೋಡಿಸಬೇಕೆಂದು ಚ. ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ ಹೇಳಿದರು.
ಅವರು ಲೋಕಸಭಾ ಚುನಾವಣಾ ಪ್ರಚಾರಾತ್ರವಾಗಿ ಸಮೀಪದ ಹೊಸಕೋಟಿ, ಗಜಮನಹಾಳ, ಮಾಸ್ತಮರಡಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಂಗ್ರೆಸ್ ಪರ ಪ್ರಚಾರ ಕೈಗೊಂಡು ಮಾತನಾಡಿದರು.
ಕಾಂಗ್ರೆಸ್ ಯುವ ಮುಖಂಡ ಸಚಿನ್ ಪಾಟೀಲ ಮಾತನಾಡಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಪಕ್ಷ, ಬಡವರ, ಬಲಿದರ ಬೆಳವಣಿಗೆಗೆ ಅನೇಕ ಗ್ಯಾರಂಟಿ ಯೋಜನೆಗಳನ್ನು ತಂದು ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲು ಶಕ್ತಿ  ನೀಡಿದೆ ಅದಕ್ಕಾಗಿ ಕಾಂಗ್ರೆಸ ಗೆಲುವಿಗೆ ಎಲ್ಲರೂ ಶ್ರಮಿಸೋಣ ಎಂದರು.
ಪ್ರಚಾರದಲ್ಲಿ ಅಡಿವಪ್ಪ ಮಾಳನ್ನವರ, ಬರಮಣ್ಣ ಸತ್ತೇನ್ನವರ, ಮಲ್ಲಿಕಾರ್ಜುನ ಕಲ್ಲೋಳಿ, ಮಂಜುನಾಥ ಹುಲಮನಿ, ನಿಂಗಪ್ಪ ತಳವಾರ ಸೇರಿದಂತೆ ನೇಸರಗಿ ಭಾಗದ ಕಾಂಗ್ರೆಸ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article