ಕಾಂಗ್ರೆಸ್ ಗೆ ಈ ಬಾರಿ ಸೋಲು ಖಚಿತ. ವಿಶ್ವೇಶ್ವರ ಹೆಗ್ಡೆ ಕಾಗೇರಿ 

Ravi Talawar
WhatsApp Group Join Now
Telegram Group Join Now
ನೇಸರಗಿ. ಕಾಂಗ್ರೆಸ್ ಎಷ್ಟೇ ಗೆಲುವಿಗಾಗಿ ಪ್ರಯತ್ನಿಸಿ, ಅಸೆ ಆಮಿಷಗಳನ್ನು ತೋರಿಸಿದರು ಮೋದೀಜಿ ಅವರನ್ನು 3 ನೇ ಬಾರಿಗೆ  ಪ್ರಧಾನಿ ಮಾಡಲು ಜನರು ಸಂಕಲ್ಪ ಮಾಡಿದ್ದಾರೆ ಎಂದು ಕೆನರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
     ಅವರು ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಸಮೀಪದ ದೇಶನೂರ, ನಾಗನೂರ, ತಿಗಡಿ, ಹಣ್ಣಿಕೇರಿ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿ ಉತ್ತರ ಕನ್ನಡ (ಕೆನರಾ ) ಕ್ಷೇತ್ರದ ಮತದಾರರು ಯಾವತ್ತು ಬಿಜೆಪಿ ಬೆಂಬಲಿಗರು ಅದರಲ್ಲೂ ಕಿತ್ತೂರ್ ಮತ್ತು ಖಾನಾಪುರ ಕ್ಷೇತ್ರದ ಜನರು ನಮ್ಮ ಪರವಾಗಿ ಮೋದಿಜಿ ಅವರನ್ನು 3 ನೇ ಬಾರಿ ಪ್ರಧಾನಿ ಮಾಡಲು ಸಜ್ಜಾಗಿದ್ದಾರೆ ಎಂದರು.
    ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ ದೇಶದ ಆರ್ಥಿಕತೆ ಬೆಳೆಸಲು, ದೇಶ ರಕ್ಷಣೆ, ಉನ್ನತಿಕರಣ, ಜಾಗತಿಕ ಮುಂದಾಳತ್ವ ವಹಿಸಿರುವ ಪ್ರಧಾನಿ ಮೋದಿಜಿ ಆಯ್ಕೆ ಮತ್ತು ಸಂಸದರಾಗಿ ವಿಶ್ವೇಶ್ವರ ಹೆಗ್ಡೆ ಕಾಗೇರಿ ಆಯ್ಕೆ ಖಚಿತ ಎಂದರು.
     ಈ ಸಭೆಯಲ್ಲಿ  ಮಲ್ಲಿಕಾರ್ಜುನ ತುಬಾಕಿ, ಶ್ರೀಶೈಲ ಕಮತಗಿ, ನಿಂಗನಗೌಡ ದೊಡ್ಡಗೌಡರ, ಮಹಾಂತೇಶ ಕೂಲಿನವರ, ದೇಮಣ್ಣ ಗುಜನಟ್ಟಿ, ಅಡಿವಪ್ಪ ಹೊಸಮನಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.
WhatsApp Group Join Now
Telegram Group Join Now
Share This Article