ವಿಶ್ವಗುರು ಬಸವಣ್ಣ ಸಂದೇಶ ಪ್ರಸ್ತುತ ಅಗತ್ಯವೆನಿಸಿದೆ : ಡಾ.ಪ್ರಭಾಕರ ಕೋರೆ

Ravi Talawar
WhatsApp Group Join Now
Telegram Group Join Now

ಬೆಳಗಾವಿ 06 : ‘ವಿಶ್ವಗುರು ಬಸವಣ್ಣನವರು ಮಾನವೀಯತೆಯನ್ನು ಸಾರಿ ಸಮಾನತೆಯ ಹರಿಕಾರರು. ಅವರ ಸಂದೇಶ ಇಂದಿಗೂ ಲೋಕಮಾನ್ಯವೆನಿಸಿದೆ. ಪ್ರಸ್ತುತ ಯುದ್ಧ ಹಾಗೂ ಜಾತಿಗಳ ಸಂಘರ್ಷದಲ್ಲಿ ಬದುಕುತ್ತಿರುವ ನಮಗೆ ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆನಿಸಿದೆ’ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟಿçÃಯ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.

ಅವರು ಬೆಳಗಾವಿ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಬೆಳಗಾವಿ ಅಖಿಲ ಭಾರತ ವೀರಶೈವ ಅಂಗಾಯತ ಮಹಾಸಭೆ ಜಿಲ್ಲಾ ಘಟಕ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಹಾಗೂ ವಿವಿಧ ಲಿಂಗಾಯತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಬೈಕ್ ರ‍್ಯಾಲಿಗೆ ರವಿವಾರ ೦೫-೦೫-೨೦೨೪ ರಂದು ಸಾಯಂಕಾಲ ಚಾಲನೆ ನೀಡಿ ಮಾತನಾಡಿದರು.

‘ಇಂದು ನಾವೆಲ್ಲ ಒಳಪಂಗಡಗಳನ್ನು ಮಾಡಿಕೊಂಡು ಹೋರಾಡುತ್ತಿದ್ದೇವೆ ಅದನ್ನು ಬದಿಗೆ ಇಟ್ಟು ಸಾಂಘಿಕವಾಗಿ ಸಮಾಜವನ್ನು ಕಟ್ಟಬೇಕಾಗಿದೆ. ಅಣ್ಣನವರು ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಪ್ರಗತಿಗಾಗಿ ಹೋರಾಡಿದರು. ಎಂಟುನೂರು ವರ್ಷಗಳಾದರೂ ಅವರ ವಿಚಾರಗಳು ಲೋಕ ಪೂಜ್ಯವೆನಿಸಿವೆಕೊಂಡಿವೆ. ಇಂದು ದೇಶ ವಿದೇಶದಲ್ಲಿ ಬಸವಣ್ಣನವರ ವಚನಗಳು ಕುರಿತು ಅಧ್ಯಯನಗಳು ನಡೆಯುತ್ತಿವೆ. ಅವರು ಕನ್ನಡ ನಾಡಿನಲ್ಲಿ ಅವತರಿಸಿರುವುದು ನಮ್ಮ ಸೌಭಾಗ್ಯ ನಾಡಿನುದ್ದಗಲಕ್ಕೂ ನಮ್ಮ ಯುವಜನರು ಅವರ ಸಂದೇಶಗಳನ್ನು ಅರಿಯುವಂತಾಗಬೇಕು. ಬಸವ ಜಯಂತಿಯನ್ನು ಅರ್ಥಪೂರ್ಣಗೊಳಿಸಬೇಕು. ಈ ನಿಮಿತ್ತ ಆಯೋಜಿಸಿರುವ ಬೈಕ್ ರ‍್ಯಾಲಿ ಬಸವ ಜಾಗೃತಿಯನ್ನುಂಟುಮಾಡಲೆAದು’ ಡಾ.ಕೋರೆಯವರು ಹಾರೈಸಿದರು.

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತ, ‘ಬಸವಣ್ಣನವರ ಮಾನವೀಯತೆ ವಿಚಾರಗಳನ್ನು ಅಳವಡಿಸಿಕೊಳ್ಳುವ ಕೆಲಸ ಮೊದಲು ನಡೆಯಬೇಕಾಗಿದೆ. ನೈತಿಕ ಬದುಕು ನಮ್ಮದಾದರೆ ಸಮಾಜ ಸುಧಾರಣೆ ಸಾಧ್ಯ. ನಡೆನುಡಿ ಒಂದಾಗಿ ಜೀವನವನ್ನು ರೂಪಿಸಿಕೊಳ್ಳುವ ಮಹತ್ತರ ಕಾರ್ಯ ಎಲ್ಲರಿಂದ ನಡೆಯಬೇಕಾಗಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಹಿರಿಯ ನ್ಯಾಯವಾದಿ ಎಂ.ಬಿ.ಜೀರಲಿ, ಡಾ.ಎಚ್.ಬಿ.ರಾಜಶೇಖರ, ಸಾಯಿ ಹಾಸ್ಪಿಟಲ್ ಡಾ.ಎಸ್.ಎಮ್.ದೊಡ್ಡಮನಿ, ಉದ್ದಿಮೆ ರಾಜು ಹತ್ತರಕಿ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಕೇಂದ್ರ ಸಮಿತಿ ಅಧ್ಯಕ್ಷ  ಗುರುದೇವ ನಿಂ. ಪಾಟೀಲ. ಉಪಾಧ್ಯಕ್ಷರಾದ ಸುಜೀತ ಮುಳಗುಂದ,  ಪ್ರಸಾದ ಹಿರೇಮಠ, ರಾಜು ಟೋಪಣ್ಣನವರ, ಬಾಲಚಂದ್ರ ಬಾಗಿ, ವೀಣಾ ನಾಗಮೋತಿ, ರಕ್ಷಾ ದೇಗಿನಾಳ, ವೀರೇಶ ಅಪ್ಪಯ್ಯನವರಮಠ ಮೊದಲಾದವರು ಉಪಸ್ಥಿತರಿದ್ದರು.

ನೂರಾರು ಸಂಖ್ಯೆಯಲ್ಲಿ ಭಕ್ತರು ಬಸವಣ್ಣನವರ ಪ್ರತಿಮೆ ಹಾಗೂ ಬಾವುಟವನ್ನು ಹಿಡಿದುಕೊಂಡು ಬೈಕ್ ರ‍್ಯಾಲಿಯನ್ನು ಯಶಸ್ಸುಗೊಳಿಸಿದರು. ರ‍್ಯಾಲಿಯು ಲಿಂಗಾಯತ ಭವನ, ಶಿವಬಸವನಗರ ಮಾರ್ಗದಿಂದ ಪ್ರಾರಂಭವಾಗಿ ನಾಗನೂರ ಮಠ, ರಾಮದೇವ ಹೊಟೇಲ್, ಚನ್ನಮ್ಮ ವೃತ್ತ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಬೋಗಾರ್ವೆಸ್, ಚಳಕಚೌಕ, ಕಪಿಲೇಶ್ವರ ಮೇಲ್ಸೇತುವೆ, ಶಿವಾಜಿ ಉದ್ಯಾನ, ಶಹಾಪೂರ ಮೂಲಕ ಬಸವೇಶ್ವರ ಸರ್ಕಲ್ (ಖಾಸಬಾಗ) ನಾಥಪೈ ಸರ್ಕಲ್, ಕೆಎಲ್‌ಇ ಬಿ.ಎಂ.ಕAಕಣವಾಡಿ ಆಯುರ್ವೇದಿಕ ಕಾಲೇಜ ಮಾರ್ಗವಾಗಿ ಬಸವವೃತ್ತ(ಗೋವಾ ವೇಸ್)ವರೆಗೆ ಜರುಗಿತು.

WhatsApp Group Join Now
Telegram Group Join Now
Share This Article