ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನ ಪರ ಘೋಷಣೆ ಕೇಳಬೇಕಾಗುತ್ತದೆ: ಸಂಸದ ಪ್ರಜ್ವಲ್ ರೇವಣ್ಣ 

Ravi Talawar
WhatsApp Group Join Now
Telegram Group Join Now

ಹಾಸನ, ಏಪ್ರಿಲ್ 15: ಹಾಸನದಲ್ಲಿ ಕಾಂಗ್ರೆಸ್​ ಅವರಪ್ಪನಾಣೆ ಗೆಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಗೆಲ್ಲಲ್ಲ. ಅಕಸ್ಮಾತ್ ಗೆದ್ದರು ಎಂದಾದರೆ ಗ್ರಾಮ ಪಂಚಾಯಿತಿಯಿಂದ ತೊಡಗಿ ದೆಹಲಿ ವರೆಗೆ ಪಾಕಿಸ್ತಾನ ಪರ ಘೋಷಣೆ ಕೇಳಬೇಕಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ  ಹೇಳಿದರು.

ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ಬಿಜೆಪಿ ಜೆಡಿಎಸ್ ನಾಯಕರ ಜಂಟಿ ಸಭೆ ನಡೆಯಿತು. ಬಳಿಕ ಮಾತನಾಡಿದ ಪ್ರಜ್ವಲ್, ಅಕಸ್ಮಾತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರೆ ಪಾಕ್​ ಪರ ಘೋಷಣೆ ಕೇಳಬೇಕಾಗುತ್ತದೆ ಎಂದರು.

ಈಗ ನಡೆಯುತ್ತಿರುವುದು ಲೋಕಸಭೆ ಚುನಾವಣೆ. ಇದು ದೇಶದ ಚುನಾವಣೆ. ದೇಶ ಉಳಿಯಬೇಕೋ ಹಾಳಾಗಬೇಕೋ ಎಂಬುದು ಇನ್ನು 12 ದಿನಗಳಲ್ಲಿ ತೀರ್ಮಾನ ಆಗಲಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2,000 ರೂ. ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರಿಗೆ ಎರಡು ಸಾವಿರ ಕೊಟ್ಟು ಒಲಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ದಲ್ಲಿ ಕಾಂಗ್ರೆಸ್ ಇದೆ ಎಂದರು. ಮಹಿಳೆಯರನ್ನು ಉದ್ದೇಶಿಸಿ, ‘ನಿಮಗೆ ಎರಡು ಸಾವಿರ ಕೊಟ್ಟು ನಿಮ್ಮ ಗಂಡಂದಿರಿಂದ ಸಾವಿರಾರು ರೂ. ವಸೂಲಿ ಮಾಡ್ತಾರೆ. ಒಂದೇ ವರ್ಷದಲ್ಲಿ ‘ಎಣ್ಣೆ’ (ಮದ್ಯ) ಬೆಲೆಯನ್ನು ನಾಲ್ಕು ಬಾರಿ ಜಾಸ್ತಿ ಮಾಡಿದ್ದಾರೆ’ ಎಂದರು.

 

WhatsApp Group Join Now
Telegram Group Join Now
Share This Article