ಕೆಲಸಗಾರರು ದೇಶ, ರಾಜ್ಯದ ಅಭಿವೃದ್ಧಿಗೆ ಹೆಗಲು ಕೊಡುತ್ತಿದ್ದಾರೆ: ಮೋಹನ ಕೋಟಿವಾಲೆ

Ravi Talawar
WhatsApp Group Join Now
Telegram Group Join Now

ಸಂಕೇಶ್ವರ04 : ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮಪಟ್ಟು ದುಡಿಯುವ ಕೆಲಸಗಾರರು ದೇಶ, ರಾಜ್ಯದ ಅಭಿವೃದ್ಧಿಗೆ ಹೆಗಲು ಕೊಡುತ್ತಿದ್ದಾರೆ ಎಂದು ಶ್ರೀ ಹಿರಣ್ಯಕೇಶಿ ಸ್ವಾಭಿಮಾನಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮೋಹನ ಕೋಟಿವಾಲೆ ಹೇಳಿದರು.

ಪಟ್ಟಣದ ಶ್ರೀ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಿ ಕಾರ್ಖಾನೆಯ ಸಂಸ್ಥಾಪಕರಾದ ದಿ.ಅಪ್ಪಣಗೌಡ ಪಾಟೀಲ ಮತ್ತು ದಿ. ವಿಶ್ವನಾಥ ಕತ್ತಿ, ದಿ. ಬಸನಗೌಡ ಪಾಟೀಲ, ದಿ.ಉಮೇಶ್ ಕತ್ತಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಅವರು ಕಾರ್ಮಿಕರು ಇಲ್ಲದೇ ಇರುವ ಜಗತ್ತನ್ನು ಊಹಿಸುವುದಕ್ಕೇ ಸಾಧ್ಯವಿಲ್ಲ. ಹಗಲಿರುಳು ದುಡಿಯುವ ಕಾರ್ಮಿಕರಿಗೆ ಶುಭಾಶಯಗಳನ್ನು ನೀಡಿದರು.

ಈ ಸಂಧರ್ಭದಲ್ಲಿ ಶ್ರೀ ಹಿರಣ್ಯಕೇಶಿ ಸ್ವಾಭಿಮಾನಿ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ಮಹಾದೇವ ಜರಳಿ,ನಿರ್ದೇಶಕರಾದ  ಅಶೋಕ ನಿಲಜಿ,  ಶಿವಾನಂದ ಹಾಲಗಡಗಿ,ಕೆಂಪಣ್ಣಾ ಹಿರೇಮಠ,ಭರಮನ್ನಾ ಗೋಟುರೆ, ರಾಮಣ್ಣಾ ಬಡಿಗೇರ,ಶಂಕರ ಹಂಚಿನಾಳೆ ಸೇರಿದಂತೆ ಅನೇಕ ಕಾರ್ಮಿಕರು ಹಾಜರಿದ್ದರು.

WhatsApp Group Join Now
Telegram Group Join Now
Share This Article