ರಾಜ್ಯದಲ್ಲಿ ಮೋದಿ ಅಲೆ ಗಟ್ಟಿಯಾಗಿದೆ: ಚರಂತಿಮಠ

Ravi Talawar
WhatsApp Group Join Now
Telegram Group Join Now

ಬಾಗಲಕೋಟೆ:,23 ರಾಜ್ಯದಲ್ಲಿ ಮೋದಿ ಅಲೆ ಸೂಪ್ತವಾಗಿ ಜನರ ಮನದಲ್ಲಿ ಗಟ್ಟಿಯಾಗಿದ್ದು, ದೇಶದ ಹಿತಕ್ಕಾಗಿ ಬಿಜೆಪಿಗೆ ಜನಮತ ನೀಡುತ್ತಾರೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಮಂಗಳವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆಮತಕ್ಷೇತ್ರದಿಂದ ನಗರ ೨ಮತ್ತು ೪ ನೇ ವಾರ್ಡಿನಲ್ಲಿ
ಹಮ್ಮಿಕೊಂಡ ಚುನಾವಣಾ ಪ್ರಚಾರದ ಪಾದಯಾತ್ರೆಯಲ್ಲಿ ಭಾಗವಹಸಿ ಮತಯಾಚನೆ ಮಾಡಿ ಮಾತನಾಡಿದರು.

ಇದು ದೇಶದ ಚುನಾವಣೆಯಾಗಿದ್ದರಿಂದ ಜನ ದೇಶದ ಭದ್ರತ್ರೆ ಹಾಗೂ ದೇಶದ ಅಭಿವೃದ್ಧಿ ಪಥದ ಬಗ್ಗೆ ಯೋಚನೆ ಇರುತ್ತದೆ,
ದೇಶದ ಅಭಿವೃದ್ಧಿ ಹಾಗೂ ಭದ್ರೆತೆ ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ ಎಂದು ಜನರಿಗೆ ಮನದಟ್ಟಾಗಿದೆ, ಇಗಾಗಿ ರಾಜ್ಯದಲ್ಲಿ
ಮೋದಿ ಅಲೆ ಜನರ ಮನಮನದಲ್ಲಿ ಗಟ್ಟಿಯಾಗಿದೆ, ಭಾರಿ ಜಿಲ್ಲೆಯಲ್ಲಿ ಗದ್ದಿಗೌಡರನ್ನು ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲ
ಪಡಿಸೋಣ ಎಂದರು.

ಪಾದಯಾತ್ರೆಯಲ್ಲಿ ನಗರಸಭೆ ಸದಸ್ಯೆ ರೇಖಾ ಕಲಬುರ್ಗಿ, ನಿರ್ಮಲಾ ಖಂಡೆಗೋಳ, ಶಶಿಕಲಾಮಜ್ಜಗಿ, ಶೋಭಾ ರಾವ್, ಮುತ್ತು
ಜಿಗಳೂರ, ನೀಲಪ್ಪ ಬೆವೂರ, ರುದ್ರುಗೌಡ, ಸಲಿಂ ಮೊಮಿನ, ರಮೇಶ ಕಾಂಬಳೆ, ಸುರೇಶ ಲಮಾಣಿ, ಈರಣ್ಣ ಬಡಿಗೇರ, ಕುಮಾರ
ಕಾಳೆ, ಉಮೇಶ ಒಡಿಯರ, ಸಂಗಮೇಶ ಆರಿ, ಹನಮಂತ ಅಂಬಿಗೇರ, ಯಕ್ಕಪ್ಪ ಅಂಬಿಗೇರ, ಸೇರಿದಂತೆ ಬಿಜೆಪಿಯ ಎಲ್ಲ ನಗರಸಭೆ
ಸದಸ್ಯರು,ಪದಾಧೀಕಾರಿಗಳು,ಕಾರ್ಯಕರ್ತರು ಭಾಗವಹಿಸಿದ್ದರು.

 

WhatsApp Group Join Now
Telegram Group Join Now
Share This Article