ಇಂಡಿ: ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಸಮುದಾಯಗಳು ಎಲ್ಲ ವಿಧದಲ್ಲು ಅಭಿವೃದ್ದಿ ಹೊಂದಲು ಸಾದ್ಯ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಯಕದ ಜೊತೆಗೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಸಂಸ್ಕಾರ ನೀಡುವುದು ಅತಿ ಅವಶ್ಯಕವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು ಅವರು
ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವೃತ್ತದ ಕಂಚಿನ ಮೂರ್ತಿ ಉದ್ಘಾಟನೆ ಮತ್ತು ಪೋಲಿಸ್ ಮೈದಾನದಲ್ಲಿ ನಡೆದ ಹಡಪದ ಅಪ್ಪಣ್ಣನವರ ಸಮಾಜದ ಜನ ಜಾಗೃತಿ ಸಮಾವೇಶ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅಂದಿನ ೧೨ ನೇ ಶತಮಾನದ ಅಣ್ಣ ಬಸವಣ್ಣನವರ ಕಾಲದಲ್ಲಿ ಮುಂಚಿಣಿಯಲ್ಲಿದ್ದ ಹಡಪದ ಅಪ್ಪಣ್ಣನವರು ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಆದರೆ ಇಂದು ಇಂಡಿಯಲ್ಲಿ ಹಡಪದ ಅಪ್ಪಣ್ಣ ಕಂಚಿನ ಮೂರ್ತಿಯ ಸ್ಥಾಪಿಸುವ ಮೂಲಕ ಗತವೈಭವ ಮರುಕಳಿಸುವಂತೆ ಮಾಡಿದ್ದ ಕಾರ್ಯ ಶ್ಲಾಗನಿಯ ಎಂದರು.
ಹಡಪದ ಅಪ್ಪಣ್ಣನವರು ಸಮಾಜಕ್ಕೆ ಸಂಸ್ಕಾರ ನೀಡಿದ್ದು ಸರ್ವರನ್ನು ಪ್ರೀತಿಸುವ ಸಮಾಜದ ನಿರ್ಮಾಣದ ಪರಿಕಲ್ಪನೆ ನೀಡಿದ್ದಾರೆ. ಅದಲ್ಲದೆ ರಾಜ್ಯದಲ್ಲಿಯೇ ಕಂಚಿನ ಮೂರ್ತಿ ಮೂರ್ತಿ ಸ್ಥಾಪಿಸಿದ್ದು ಇಂಡಿ ನಗರದಲ್ಲಿ ಮಾತ್ರ ಇದಕ್ಕಾಗಿಯೆ ತಾಲೂಕಿನ ಜನ ಹೃದಯವಂತರು ಎಂದರು.
ತಂಗಡಗಿ ಕ್ಷೇತ್ರದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಮಾತನಾಡಿ ಹಡಪದ ಅಪ್ಪಣ್ಣನವರ ಚಿಂತನೆಗಳನ್ನು ಸಮಾಜದ ಪ್ರತಿಯೊಬ್ಬರೂ ರೂಢಿಸಿಕೊಂಡು ಅವರ ಸ್ಮರಣೆ ಮಾಡುತ್ತ ಪರಸ್ಪರ ಪ್ರಿತಿಯಿಂದ ಬಾಳುತ್ತ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದರು.
ಗುರುದೇವ ಕಾತ್ರಾಳದ ಅಮೃತಾನಂದ ಶ್ರೀಗಳು ಮಾತನಾಡಿ ಪೂಜೆ ಮಾಡಿದರೂ ಕಾಯಕವೇ,ಸಣ್ಣ ಕೆಲಸ ಮಾಡಿದರೂ ಕಾಯಕವೇ. ಅಪ್ಪಣ್ಣ ಸಮಾಜ ವೃದ್ಧರನ್ನು ಸುಂದರವಾಗಿ ಸೇರಿದಂತೆ ಎಲ್ಲರನ್ನೂ ಸುಂದರವಾಗಿ ಕಾಣಲು ಕ್ಷೌರಿಕ ವೃತ್ತಿ ಮಾಡುತ್ತಿದ್ದು, ಅದು ಸಣ್ಣ ಕೆಲಸವಲ್ಲ. ಅವರು ಕಾಯಕತ್ವದಲ್ಲಿ ದೈವತ್ವ ಕಾಣುವರು. ಅಪ್ಪಣ್ಣ ಸಮಾಜ ಸಶಕ್ತವಾಗಿ ಬೆಳೆಯಬೇಕಾಗಿದೆ, ಸಮಾಜದ ಯುವಕರು ಈ ಕುರಿತು ಚಿಂತನೆ ಮಾಡಬೇಕಾಗಿದೆ ಎಂದರು.
ಅಥರ್ಗಾದ ಈಶ ಪ್ರಸಾದ ಶ್ರೀಗಳು,ಇಂಡಿಯ ಸ್ವರೂಪಾನಂದ ಶ್ರೀಗಳು,ಉಪನ್ಯಾಸಕ ಸತ್ಯಪ್ಪ ಹಡಪದ,ಕಲಬುರಗಿ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಅಧ್ಯಕ್ಷ ಈರಣ್ಣ ಹಡಪದ,ಕಾಸುಗೌಡ ಬಿರಾದಾರ ಮಾತನಾಡಿದರು.
ಇದೇ ವೇಳೆ ಸಮಾಜಕ್ಕೆ ಶ್ರಮಿಸಿದ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಸಿದ್ದರಾಯ ಅಪ್ತಾಗಿರಿ, ಸಮಾಜದ ಅಧ್ಯಕ್ಷ ಸಿದ್ದು ನಾವಿ,ಶ್ರೀಮತಿ ಶಕುಂತಲಾ ನಾವಿ,ಸಂತೋಷ ಗವಳಿ,ನಟರಾಜ ಗವಳಿ,ಶಿವಾನಂದ ನಾವಿ,ಅಶೋಕ ಹಡಪದ,ಬಸವರಾಜ ನಾವಿ,ಧೂಳಪ್ಪ ನಾವಿ,ಮತ್ತು ಪುರಸಭೆಯ ಸದಸ್ಯರನ್ನು ವಿವಿಧ ಸಮಾಜದ ಗಣ್ಯರನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ವಿಜಯಪುರದ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಶಿವಶರಣ, ಸಿಂದಗಿಯ ಶಿವಾನಂದ ಹಡಪದ,ನಿಂಗಪ್ಪ ನಾವಿ,ಸೋಲಾಪುರದ ಪಂಡಿತ ಏಳಗಿ, ಭಾರತಿ ನಾವಿ,ಸುನೀಲ ಉಕನಾಳ ಮತ್ತಿತರಿದ್ದರು. ಧರ್ಮರಾಜ ಮುಜಗೊಂಡ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಗೊರನಾಳ ನಿರೂಪಿಸಿದರು.