ಪ್ರಿಯಾಂಕಾ ಪರ ಸಚಿವ ಸತೀಶ್ ಜಾರಕಿಹೊಳಿ ಮತಯಾಚನೆ

Ravi Talawar
WhatsApp Group Join Now
Telegram Group Join Now
ರಾಯಬಾಗ,18: ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಂಚಲಿ ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ಸಂಭಾಜಿ ಶಿಂಧೆ ಅವರ ಮನೆಗೆ  ಮಾನ್ಯ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ  ಸತೀಶ್  ಜಾರಕಿಹೊಳಿ ಅವರು ಹಾಗೂ ಮಾಜಿ ಶಾಸಕರಾದ ಎಸ್ ಬಿ ಘಾಟಗೆ ಸಾಹೇಬರು ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ  ಮಹಾವೀರ  ಮೋಹಿತೆ ಅವರು ಹಾಗೂ ಯುವ ಕಾಂಗ್ರೆಸ್ ಮುಖಂಡರಾದ  ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಸೌಹಾರ್ದತೆಯಿಂದ ಬೇಟಿ ನೀಡಿ ಚಿಕ್ಕೋಡಿ  ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಕು ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಅವರ ಪರವಾಗಿ ಮತಯಾಚನೆ ಮಾಡಿದರು.
ಇದೆ ವೇಳೆ (ಆಟೋ) ಸ್ವತಂತ್ರ ಪಕ್ಷದ ಮುಖಂಡರಾದ ಅಲ್ತಾಪ ಐನಾಪೂರೆ ಅವರು ಹಾಗೂ ಬೇರೆ ಬೇರೆ  ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ    ಸತೀಶ್  ಜಾರಕಿಹೊಳಿ  ಹಾಗೂ ಮಾಜಿ ಶಾಸಕರಾದ ಎಸ್ ಬಿ ಘಾಟಗೆ ಸಾಹೇಬರು  ಮಹಾವೀರ  ಮೋಹಿತೆ  ಹಾಗೂ ಯುವ ಕಾಂಗ್ರೆಸ್ ಮುಖಂಡರಾದ  ರಾಹುಲ್  ಜಾರಕಿಹೊಳಿ ಮತ್ತು  ಸದಾಶಿವ ದೇಶಿಂಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ  ಅಜು೯ನ ನಾಯಿಕವಾಡಿ ರಾಜು ಕೊಟಗಿ ದೀಲಿಪ ಜಮಾದಾರ ಎನ್  ಎಂ ಮಗದುಮ್ಮ ಶಿವು ಪಾಟೀಲ್ ಸತ್ತಾರ ಮುಲ್ಲಾ ಸಂಜು ಬಾನೆ  ರಾಜು ಶಿರಗಾಂವೆ ನಾಮದೇವ ಕಾಂಬಳೆ ಚಿಂಚಲಿ ರಾಜು ಪಾಟೀಲ್ ಪಟ್ಟಣದ ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಕೌಜಲಗಿ ಪ್ರವೀಣ್ ಹುಕ್ಕೇರಿ ಹರುಣ ತರಡೆ ಕುಮಾರ್ ಹಾರೂಗೇರಿ ಅಬ್ಬಾಸ್ ಮುಲ್ಲಾ ರಾಮಚಂದ್ರ ಕಾಂಬಳೆ ಸುಲ್ತಾನ ಹೆಗಡೆ ಅಶೋಕ್ ಬನಗೆ ಅಜಿತ್ ಪಾಟೀಲ್  ಶಿವಾಜಿ ಸೌಂದಲಗಿ ಕಿರಣ ದುವೆ೯  ರಾಮು ಹೊನಕಡೆ ಯುನೂಸ್ ದಳವಾಯಿ  ಫಿರೋಜ್ ಮಕಾಂದಾರ ಬಾಹುಬಲಿ ಹಂಡಗೆ ಸಹದೇವ ಯಡ್ರಾಂವೆ ಅರ್ಬಾಜ್ ಮುಲ್ಲಾ ರವಿ ಬೆಡರ ಅಪ್ಪು ವಡ್ಡರ ಪ್ರಶಾಂತ ಕಾಂಬಳೆ ವಿಲಾಸ ಬಸನಾಯಿಕ ಜಾವೇದ್ ಐನಾಪೂರೆ ಶೇಖರ್ ಕುರಣೆ ಯುವರಾಜ್ ಕುರಣೆ ಸಚಿನ್ ಮುಂಜೆ ಶೈಲೇಶ್ ಗುದಗೇನ್ನವರ ಸುಭಾಷ್ ಮಲಾಜುರೆ ಸಿದ್ದು ಮಲಾಜುರೆ ಭರತೇಶ ಧಮ೯ನ್ನವರ ಹಾಗೂ ಚಿಂಚಲಿ ಪಟ್ಟಣದ ಸಮಸ್ತ ಕಾಂಗ್ರೆಸ್ ಮುಖಂಡರು ಕಾಯ೯ಕತ೯ರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article