ಜನರಿಗೆ ಧ್ವನಿಯಾಗುತ್ತೇನೆ, ಸಮಸ್ಯೆಗಳಿಗೆ ಪರಿಹಾರವಾಗುತ್ತೇನೆ – ರಕ್ಷಾ ರಾಮಯ್ಯ

Hasiru Kranti
WhatsApp Group Join Now
Telegram Group Join Now

ಪ್ರಧಾನಿ ಸಮಾವೇಶ ಮುಗಿಯುತ್ತಿದ್ದಂತೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ರಕ್ಷಾ ರಾಮಯ್ಯ ಅದ್ದೂರಿ ರೋಡ್ ಶೋ – ಯುವ ನಾಯಕನ ಜೊತೆ ಸಾಗಿದ ಸಹಸ್ರಾರು ಮಂದಿ

ಚಿಕ್ಕಬಳ್ಳಾಪುರ, ಏ, 19; ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೊಬಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಭರ್ಜರಿ ಪ್ರಚಾರ ನಡೆಸಿದರು. ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಜನ ಸಾಮಾನ್ಯರು, ಮಹಿಳೆಯರು ನಡುವೆ ಅದ್ದೂರಿ ರೋಡ್ ಶೋ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರ ಸಮಾವೇಶ ಮುಗಿಯುತ್ತಿದ್ದಂತೆ ರಕ್ಷಾ ರಾಮಯ್ಯ ಯಲಹಂಕದಿಂದ ಮಂಚೇನಹಳ್ಳಿ ಪ್ರವೇಶಿಸಿದರು.
ಶಾಸಕರಾದ ಪ್ರದೀಪ್ ಈಶ್ವರ್, ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ ಮತ್ತಿತರರ ಜೊತೆಗೂಡಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು.


ರಕ್ಷಾ ರಾಮಯ್ಯ ಅವರನ್ನು ಪಕ್ಷದ ಕಾರ್ಯಕರ್ತರು, ಮುಖಂಡರು, ಕ್ಷೇತ್ರದ ಜನತೆ ಜೈಕಾರ, ಘೋಷಣೆಗಳ ನಡುವೆ ಸ್ವಾಗತಿಸಿದರು. ಯುವ ನಾಯಕನ ಜೊತೆ ಮಾತನಾಡಲು, ಕೈಕುಲುಕಲು ಮುಗಿಬಿದ್ದರು. ಜನ ಅಪರಿಮಿತ ಉತ್ಸಾಹ ಮತ್ತು ಸಂಭ್ರಮದಿಂದ ಸ್ವಾಗತಿಸಿದರು.
ರೋಡ್ ಶೋ ಉದ್ದಕ್ಕೂ ರಕ್ಷಾ ರಾಮಯ್ಯ ಕೈ ಮುಗಿದು ಈ ಬಾರಿ ತಮ್ಮನ್ನು ಆಶೀರ್ವದಿಸುವಂತೆ ವಿನಮ್ರವಾಗಿ ಕೋರಿದರು.
ನಂತರ ಮಾತನಾಡಿದ ರಕ್ಷಾ ರಾಮಯ್ಯ, ಈ ಬಾರಿ ನನ್ನನ್ನು ಗೆಲ್ಲಿಸಿದರೆ ನಾನು ಜನರ ಧ್ವನಿಯಾಗಿ, ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವನ್ನು ಅತ್ಯಂತ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆಯಿಂದ ಮಾಡುತ್ತೇನೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article