ಬಿಜೆಪಿಯ ಧ್ವಜಕ್ಕೆ ದುಷ್ಟಶಕ್ತಿಯನ್ನು ಓಡಿಸುವ ಶಕ್ತಿ ಇದೆ ಎಂದ ಹರ್ಯಾಣ ಸಚಿವ ಕನ್ವರ್ ಪಾಲ್

Ravi Talawar
WhatsApp Group Join Now
Telegram Group Join Now

ಹರ್ಯಾಣ ,ಏಪ್ರಿಲ್ 11: ಬಿಜೆಪಿಯ ಧ್ವಜಕ್ಕೆ ದುಷ್ಟಶಕ್ತಿಯನ್ನು ಓಡಿಸುವ ಶಕ್ತಿ ಇದೆ ಎಂದು ಹರ್ಯಾಣ ಸಚಿವ ಕನ್ವರ್ ಪಾಲ್ ಹೇಳಿದ್ದಾರೆ. ಬಿಜೆಪಿಯ ಕಾರ್ಯಕರ್ತರೆಲ್ಲವೂ ಕಮಲದಂತೆ, ಕೆಸರಿನಲ್ಲಿ ಬೆಳೆದರೂ ಪರಿಶುದ್ಧವಾಗಿರುತ್ತವೆ ಎಂದರು. ಜಹಾ ಭಾರತೀಯ ಜನತಾ ಪಾರ್ಟಿ ಕಾ ಝಂಡಾ ಲಗೇಗಾ ವಹಾ ಸೇ ದುಷ್ಟ್​ ಆತ್ಮಾಯೇ, ಭೂತ್​ ಪ್ರೇತ್​ ಭೀ ದೂರ್ ರಹೇಂಗೆ. ಅಂದರೆ ಬಿಜೆಪಿ ಧ್ವಜ ಎಲ್ಲೆಲ್ಲಿ ಇರುತ್ತೋ ಅಲ್ಲಿ ದುಷ್ಟಶಕ್ತಿಗಳು ದೂರವಿರುತ್ತವೆ ಎಂದಿದ್ದಾರೆ.

ಯಮುನಾನಗರ ಜಿಲ್ಲೆಯ ಜಗದ್ರಿಯಿಂದ ಶಾಸಕರಾಗಿರುವ ಪಾಲ್ ಅವರು ಹರ್ಯಾಣ ಸಂಪುಟದಲ್ಲಿ ಅತ್ಯಂತ ಹಿರಿಯ ಸಚಿವರಾಗಿದ್ದಾರೆ. ಬಿಜೆಪಿಯ ಮೊದಲ ಅಧಿಕಾರಾವಧಿಯಲ್ಲಿ, 2014 ರಿಂದ 2019 ರವರೆಗೆ ಅವರು ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದರು. 2019 ರಲ್ಲಿ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಯಿತು.

ಮನೋಹರ್ ಲಾಲ್ ಖಟ್ಟರ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರು ಕೂಡ ರಾಜೀನಾಮೆ ನೀಡಿದರು, ಆದರೆ ಮಾರ್ಚ್ 12 ರಂದು ರಚನೆಯಾದ ನಯಾಬ್ ಸೈನಿ ಸರ್ಕಾರದಲ್ಲಿ ಪಾಲ್ ಅವರು ಸಿಎಂ ನಂತರ ಅತ್ಯಂತ ಹಿರಿಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್​ 19ರಿಂದ ಜೂನ್​ 1ರವರೆಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ, ಜೂನ್ 4ರಂದು ಫಲಿತಾಂಶ ಹೊರಬರಲಿದೆ.

WhatsApp Group Join Now
Telegram Group Join Now
Share This Article