ಏಪ್ರಿಲ್ 23 ರಂದು ಘುಮಟಮಾಳ  ಮಾರುತಿ ದೇವಸ್ಥಾನದಲ್ಲಿ ಹನುಮಾನ ಜನ್ಮೋತ್ಸವ

Ravi Talawar
WhatsApp Group Join Now
Telegram Group Join Now

ಬೆಳಗಾವಿ,ಏಪ್ರಿಲ್ 22: ಹಿಂದವಾಡಿಯ ಪುರಾತನ ಶ್ರೀ ಘುಮಟಮಾಳ  ಮಾರುತಿ ದೇವಸ್ಥಾನದಲ್ಲಿ ಹನುಮಾನ ಜನ್ಮೋತ್ಸವವನ್ನು ಏಪ್ರಿಲ್ 23 ರಂದು ಆಚರಿಸಲಾಗುತ್ತದೆ.

23ರ ಮಂಗಳವಾರ ಬೆಳಗ್ಗೆ ನಾಲ್ಕು ಗಂಟೆಗೆ ಹನುಮಾನ ಮೂರ್ತಿ ಅಭಿಷೇಕ, ಐದರಿಂದ ಏಳರವರೆಗೆ ಶ್ರೀ ಕೃಷ್ಣಮೂರ್ತಿ ಬೊಂಗಾಳೆಯವರ ಕೀರ್ತನೆ, ಸೂರ್ಯದಯ ಸಮಯಕ್ಕೆ ಜನ್ಮ ಮತ್ತು ಆರತಿ, ಏಳರಿಂದ ಹತ್ತರವರೆಗೆ ಪವಮಾನ ಯಜ್ಞ ಮತ್ತು ತೀರ್ಥಪ್ರಸಾದ, ಮಧ್ಯಾಹ್ನ ಹನ್ನೆರಡರಿಂದ ಮೂರು ಗಂಟೆಗೆ ಮಹಾಪ್ರಸಾದ ನಡೆಯಲಿದೆ.

ಭಕ್ತರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳುವಂತೆ ಘುಮಟಮಾಳ  ಮಾರುತಿ ಮಂದಿರ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಕಾಂತ ಬಾಂಡಗಿ, ಕಾರ್ಯದರ್ಶಿ ಪ್ರಕಾಶ ಮಾಹೇಶ್ವರಿ ಹಾಗೂ ಸಂಗಡಿಗರು ಮನವಿ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article