ಎನ್‌ಕೌಂಟರ್‌ನಲ್ಲಿ ಹತರಾದ ಎಂಟು ಮಾವೋವಾದಿಗಳ ಗುರುತು ಪತ್ತೆ

Ravi Talawar
WhatsApp Group Join Now
Telegram Group Join Now

ಹೈದರಾಬಾದ್​02: ಛತ್ತೀಸ್‌ಗಢದ ಅಬುಜಮದ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದ್ದ ಎನ್‌ಕೌಂಟರ್‌ನಲ್ಲಿ ಹತ್ತು ಮಂದಿ ಮಾವೋವಾದಿಗಳು ಹತರಾಗಿದ್ದು, ಈ ಪೈಕಿ ಎಂಟು ಜನರ ಗುರುತು ಪತ್ತೆ ಹಚ್ಚಲಾಗಿದೆ. ಅದರಲ್ಲಿ ಮೂವರು ತೆಲಂಗಾಣದವರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೆದ್ದಪಲ್ಲಿ ಜಿಲ್ಲೆಯ ಪಾಲಕುರ್ತಿ ಮಂಡಲದ ಜಿಯಾರಂ ಗ್ರಾಮದ ಜೋಗಣ್ಣ ಅಲಿಯಾಸ್ ಜಿಸ್ಸು ಅಲಿಯಾಸ್ ಚೀಮ ನರ್ಸಯ್ಯ (66), ಮಂಚಿರ್ಯಾಲ ಜಿಲ್ಲೆಯ ವಿನಯ್ ಅಲಿಯಾಸ್ ಕೇಶಬೋಯಿನಾ ರವಿ (55) ಮತ್ತು ವರಂಗಲ್‌ನ ಸುಶ್ಮಿತಾ ಅಲಿಯಾಸ್ ಚೈತೆ (26) ಎಂದು ಗುರುತಿಸಲಾಗಿದೆ.

ಮೃತ ಜೋಗಣ್ಣನ ವಿರುದ್ಧ 196 ಪ್ರಕರಣಗಳಿದ್ದು, ಈತನ ಮಾಹಿತಿ ನೀಡಿದವರಿಗೆ ಸರಕಾರ 25 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಅಲ್ಲದೇ ಮಾವೋವಾದಿ ವಿಭಾಗೀಯ ಸಮಿತಿ ಸದಸ್ಯ ರವಿ ಬಗ್ಗೆ ಮಾಹಿತ ನೀಡಿದರೆ 8 ಲಕ್ಷ ರೂ., ಮಾವೋವಾದಿ ಪಕ್ಷದ ಸದಸ್ಯೆ ತಿಕ್ಕ ಸುಶ್ಮಿತಾ ಕುರಿತು ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು.

ಕಳೆದ ತಿಂಗಳು 16 ರಂದು ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಅರಣ್ಯದಲ್ಲಿ ನಡೆದ ಭಾರಿ ಎನ್‌ಕೌಂಟರ್‌ನಲ್ಲಿ 29 ಮಾವೋವಾದಿಗಳು ಹತರಾಗಿದ್ದರು, ಅವರಲ್ಲಿ ಭೂಪಾಲಪಲ್ಲಿ ಜಿಲ್ಲೆಯ ಶಂಕರ್ ರಾವ್ ಮತ್ತು ಅವರ ಪತ್ನಿ ಅದಿಲಾಬಾದ್ ಜಿಲ್ಲೆಯ ದಾಸರ್ವರ್ ಸುಮನಾ ಅಲಿಯಾಸ್ ರಜಿತಾ ಹತರಾಗಿದ್ದರು. ಇತ್ತೀಚೆಗಷ್ಟೇ 15 ದಿನಗಳೊಳಗೆ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಮೂವರು ತೆಲಂಗಾಣ ಮಾವೋವಾದಿಗಳು ಹತರಾಗಿದ್ದರು.

WhatsApp Group Join Now
Telegram Group Join Now
Share This Article