ಬೆಳಗಾವಿ: ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಹಾಗೂ ವ್ಯವಸ್ಥಾಪನ ಅಧ್ಯಾಪಕರ ಸಂಘ ಮತ್ತು ಸ್ನಾತಕೋತರ ವಾಣಿಜ್ಯ ವಿಭಾಗಆರ್ ಸಿ ಯುಇವರ ಸಹಯೋಗದಲ್ಲಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣವನ್ನು ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಪ್ರೊ. ಎಂ. ರಾಮಚಂದ್ರಗೌಡ ಕುಲಪತಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರು ವಾಣಿಜ್ಯಶಾಸ್ತ್ರ ಹಾಗೂ ವ್ಯವಸ್ಥಾಪನ ವಿಷಯಗಳು ಒಂದೇ ನಾಣ್ಯದಎರಡು ಮುಖಗಳು ಇವು ತ್ವರಿತವಾಗಿ ಬದಲಾವಣೆ ಹೊಂದುತ್ತಿದ್ದುಅದರಜೊತೆಗೆ ನಮ್ಮಅಧ್ಯಾಪಕರು ಸಹ ಬದಲಾವಣೆಗೆ ಹೊಂದಿಕೊಳ್ಳಬೇಕು ಎಂದು ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯಉಪನ್ಯಾಸಕರಾದ ಪ್ರೊ. ಆರ್ಎಲ್ ಹೈದರಾಬಾದ್ ಇಂದಿನ ವಾಣಿಜ್ಯ ವಿಷಯದಲ್ಲಿ ಪ್ರಾಧ್ಯಾಪಕರು ಹೆಚ್ಚು ಹೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ಪ್ರೊ. ಎಚ್ ವೈ ಕಾಂಬ್ಳೆ ವಹಿಸಿದ್ದರು. ವಿಚಾರ ಸಂಕೀರ್ಣದ ಮೊದಲನೇ ಅವಧಿಯ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎಸ್ಎಸ್ ಹೂಗಾರ್ ನಿವೃತ್ತ ಪ್ರಾಧ್ಯಾಪಕರುಇವರು ಪ್ರಸ್ತುತ ವಾಣಿಜ್ಯಶಾಸ್ತ್ರ ವಿಭಾಗದ ವಿ?ಯಗಳ ಬಗ್ಗೆ ವಿವರವಾಗಿತಮ್ಮ ವಿಚಾರವನ್ನು ತಿಳಿಸಿದರು ಅಧ್ಯಕ್ಷತೆಯನ್ನು ಪ್ರೊ. ಬಿ ಎಸ್ ನಾವಿ ಕುಲಸಚಿವರುಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಜಯಪುರ ವಹಿಸಿಕೊಂಡಿದ್ದರು.
ಎರಡನೇಅವಧಿಯ ವಿಚಾರ ಸಂಕೀರ್ಣದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸೂರ್ಯಕುಮಾರ್ ಕನೈ ಇವರು ಪ್ರಸ್ತುತ ವ್ಯವಸ್ಥಾಪನ ವಿಷಯಗಳ ಮೇಲೆ ಬೆಳಕು ಚೆಲ್ಲಿದರು ಈ ಅವಧಿಗೆಅಧ್ಯಕ್ಷ ಸ್ಥಾನವನ್ನುಡಾ. ಆರ್ ಎಂ ಪಾಟೀಲ್ ವಹಿಸಿದ್ದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ.ಶಿವಾನಂದ ಗೊರನಾಳೆ, ಕುಲಸಚಿವರು ಮೌಲ್ಯಮಾಪನಆರ್ ಸಿ ಯು ಬೆಳಗಾವಿ ಇವರು ಪ್ರಸ್ತುತ ವಿದ್ಯುನ್ಮಾನ ವಾಣಿಜ್ಯ ಮೇಲೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು
ಅಧ್ಯಕ್ಷತೆಯನ್ನು ಪ್ರೊ. ಎಸ್ ಬಿ ಆಕಾಶ ವಿತ್ತ ಅಧಿಕಾರಿಗಳು ಆರ್ ಸಿ ಯು ಬೆಳಗಾವಿ ವಹಿಸಿದ್ದರು. ಇದೇ ಸಂದರ್ಭದಲ್ಲಿದೇಶದ ವಿವಿಧ ಭಾಗಗಳಿಂದ ಸುಮಾರು ೪೦ಕ್ಕೂ ಹೆಚ್ಚು ಪ್ರಾಧ್ಯಾಪಕರುತಮ್ಮ ಪ್ರಬಂಧವನ್ನು ಮಂಡಿಸಿದರು.
ಆರ್ ಸಿ ಯು ಸಿ ಎಮ್ ಟಿ ಏ ಸಂಘದಅಧ್ಯಕ್ಷರಾದಡಾ. ಚಂದ್ರಶೇಖರ್ ಗುಡಸಿ, ಪ್ರೊ. ಆರ್ ವಿ ಜಲವಾದಿ ಹಾಗೂ ಸಂಘದಎಲ್ಲಾ ಪದಾಧಿಕಾರಿಗಳು ವಿವಿಧ ವಿದ್ಯಾಲಯದ ಸುಮಾರುಎರಡು ನೂರಕ್ಕೆ ಹೆಚ್ಚು ಅಧ್ಯಾಪಕರು ಭಾಗವಹಿಸಿದ್ದರು
ವಾಣಿಜ್ಯ ಶಾಸ್ತ್ರ ಮತ್ತು ವ್ಯವಸ್ಥಾಪನ ಶಾಸ್ತ್ರ ಒಂದೇ ನಾಣ್ಯದ ಎರಡು ಮುಖಗಳು :ಪ್ರೊ. ಎಂ. ರಾಮಚಂದ್ರಗೌಡ

Leave a comment
Leave a comment