ಕಾಂಗ್ರೆಸ್ ನವರು  ಹಿಂದೂ ಮುಸ್ಲಿಂ ಎಂದು  ನಮ್ಮ ನಿಮ್ಮನ್ನು  ದೂರ ಮಾಡಲು ಯತ್ನಿಸುತ್ತಾರೆ ಎಚ್ಚರ: ಬಿ ಶ್ರೀರಾಮುಲು 

Ravi Talawar
WhatsApp Group Join Now
Telegram Group Join Now
ಬಳ್ಳಾರಿ ಏ 23 ‘ದೇಶದ ಜನರಿಗೆ ಬದುಕು ಕಟ್ಟಿಕೊಡುವ ಮೋದಿ ಗ್ಯಾರಂಟಿ ಕಾರ್ಯಕ್ರಮಗಳು ಶಾಶ್ವತ ಗ್ಯಾರಂಟಿಯಾಗಿವೆ’ ನಮ್ಮ ದೇಶವನ್ನು ಆರ್ಥಿಕವಾಗಿ ಸಮಾಜಿಕವಾಗಿ ಸಶಕ್ತಗೊಳಿಸಲು ಬಿಜೆಪಿಗೆ ಮತ ನೀಡಿ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.
ಅವರು  ನಗರದ 19 ನೇ ವಾರ್ಡಿನ ಹುಸೇನ್ ನಗರದಲ್ಲಿ  ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ
ದೇಶದ ಎಲ್ಲ ಜನರನ್ನು ಆರ್ಥಿಕ, ಸಾಮಾಜಿಕವಾಗಿ ಸಶಕ್ತಗೊಳಿಸುವ ಯೋಜನೆಗಳನ್ನು ಮೋದಿಯವರು ಪ್ರಣಾಳಿಕೆಯಲ್ಲಿ ಘೋಷಿಸಿದ್ದಾರೆ. ಬಡತನ ನಿರ್ಮೂಲನೆಗಾಗಿ ವಿಶೇಷ ಕಾರ್ಯಕ್ರಮ ಜಾರಿಗೊಳಿಸುತ್ತಿದ್ದಾರೆ.
ರೈತರಿಗಾಗಿ ಕಿಸಾನ್ ಸಮ್ಮಾನ್, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆ ಜಾರಿಗೊಳಿಸಿದ್ದಾರೆ. ಸೌರ ವಿದ್ಯುತ್ ಉತ್ಪಾದನೆ ಮೂಲಕ ಎಲ್ಲರಿಗೂ ಉಚಿತ ವಿದ್ಯುತ್ ನೀಡುವ ಕಾರ್ಯಕ್ರಮ ಘೋಷಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಈ ಚುನಾವಣೆವರೆಗೆ ಮಾತ್ರ ಜಾರಿಯಲ್ಲಿರುತ್ತವೆ. ಆದರೆ ಮೋದಿ ಗ್ಯಾರಂಟಿಗಳು ಶಾಶ್ವತವಾಗಿ ಇರಲಿವೆ’
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆ ಜಾರಿಗೊಳಿಸಿದ್ದಾರೆ. ಸೌರ ವಿದ್ಯುತ್ ಉತ್ಪಾದನೆ ಮೂಲಕ ಎಲ್ಲರಿಗೂ ಉಚಿತ ವಿದ್ಯುತ್ ನೀಡುವ ಕಾರ್ಯಕ್ರಮ ಘೋಷಿಸಿದ್ದಾರೆ.    ಕಾಂಗ್ರೆಸ್ ನವರು  ಹಿಂದೂ ಮುಸ್ಲಿಂ ಎಂದು  ನಮ್ಮ ನಮ್ಮಲ್ಲೇ  ಫೇಸ್ಬುಕ್ ವಾಟ್ಸಪ್ ಗ್ರೂಪ್ ಗಳಲ್ಲಿ    ದೂರ ಮಾಡಲು ಯತ್ನಿಸುತ್ತಿದ್ದಾರೆ   ದಯಮಾಡಿ ಇದನ್ನು ಕಿವಿಗೂಡಬೇಡಿ  ಅವರಿಂದ ಎಚ್ಚರವಾಗಿರಿ.  ನಾವೆಲ್ಲಾ ಒಂದೇ ಅಣ್ಣ ತಮ್ಮಂದಿರ ಹಾಗೆ  ಎಂದರು ಈ ಬಾರಿ ನಿಮ್ಮ ಮನೆಯ  ಮಗ ಶ್ರೀರಾಮುಲು   ಗೆಲ್ಲಿಸಿ ಎಂದು ಮತಬಾಂಧವರಲ್ಲಿ ಮನವಿ ಮಾಡಿದರು.
   ಈ ಸಂದರ್ಭದಲ್ಲಿ ಮಾಜಿ ಶಾಸಕರಾದ  ಸೋಮಶೇಖರ್ ರೆಡ್ಡಿ  ಲಕ್ಷ್ಮಿ ಅರುಣ  ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ಸಿ ಇಬ್ರಾಹಿಂ ಬಾಬು   ಜೆಡಿಎಸ್ ಜಿಲ್ಲಾಧ್ಯಕ್ಷರಾದ  ಮೀನಳ್ಳಿ ತಾಯಣ್ಣ  ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕಾರ್  ಬಿಜೆಪಿ ಮುಖಂಡರಾದ ಗುಜುರಿ ಅಜೀಜ್  ರಿಜ್ವಾನ್ ಸಾಬ್  ಮುನ್ನಾಬಾಯ್ ಹುಸೇನ್ ನಗರ್ ಮುನಿರ್  ಮಾಜಿ ಸದಸ್ಯರಾದ ಕೃಷ್ಣಪ್ಪ  ಸೂನರ್ ದಾದು, ಜೆಡಿಎಸ್ ನಗರ ಅಧ್ಯಕ್ಷ ವಂಡ್ರಿ ಫಕ್ರುದ್ದೀನ್  ಸರ್ಮಾಸ್  ಶೇಕಮ್ಮ ಕುಮಾರಮ್ಮ ಸೇರಿದಂತೆ ವಾರ್ಡಿನ ಮುಖಂಡರು ಕಾರ್ಯಕರ್ತರು ಉಪಸ್ಥಿದ್ದರು
WhatsApp Group Join Now
Telegram Group Join Now
Share This Article